ಶನಿವಾರ, ಜುಲೈ 7, 2012

(15) ಸಂಕಷ್ಟದಲ್ಲಿ ಸೊಸೆ


ನಾನೊಂದು ಗಿಳಿಮರಿಯಂತೆ
ನನ್ನರಿಯದ ಇವರು ಗಿಡುಗಗಳಂತೆ
ಏನ ಮಾಡಲಿ ನಾ ಏನ ಹೇಳಲಿ ನಾ
ಇದೆಲ್ಲಾ ನನಗೆ ಬಂದ ಗ್ರಹಚಾರ

ಇದನರಿಯದವರು ತಿಳಿಯುವವರೆಗೂ
ನಾ ಸುಮ್ಮನೇ ಹೆದರುತ ಇರಲೇನು
ನೀ ಹೇಳಯ್ಯ ನಿಜ ನುಡಿಯಯ್ಯ
ನಾ ಕೇಳಲು ಕಾಯುತ ಕುಳಿತಿರುವೆ

ಧೈರ್ಯವ ಮಾಡುತ ಕಾರ್ಯವ ಮುಗಿಸುತ
ದಿನ ಕಳೆಯಲು ನಾನಿರಲೇನು
ಹೀಗೇಕಾಯ್ತೋ ನೆಮ್ಮದಿ ಮುರಿದೋಯ್ತೋ 
ನಾನೀಗ ನಿರ್ಜೀವ ಗೊಂಬೆಯಂತೆ.|
               
                          ಸೋಮೇಶ್ ಗೌಡ

1 ಕಾಮೆಂಟ್‌: