ಶನಿವಾರ, ಜುಲೈ 7, 2012

(16)      ಸ್ತ್ರೀ


ಕವಿತೆ ಬರೆಯುವವನ ಕೈಗೆಂದೂ ಪೆನ್ನಿನ ಕೊರತೆ ಬರದಿರಲಿ 
ಒಲೆ ಹಚ್ಚೋ ಬಾಲೆಗೆಂದೇ ಬಳೆ ಮೀಸಲಿರಲಿ
ಬರೆದವರಿಗೆಲ್ಲ ಬರುವುದಿಲ್ಲ ಕವಿಯೆಂಬ ಪಟ್ಟ
ಬಳೆತೊಟ್ಟವಳಿಗೆಂದೇ ದೇವರು ಸ್ತ್ರೀಎಂಬ ಹೆಸರಿಟ್ಟ


ಹೂ ಮುಡಿದು ನಡೆವಾಗವಳು ಬಾಗಿತು ಬಾಳೆದಿ0ಡು
ಹೂವ ಮುಡಿದಾಗವಳ ತುಂಬು ಸೌಂದರ್ಯವ ಕಂಡು
ಕಾದು ಕಾದು ಕುಳಿತಿತ್ತು ದುಂಬಿಯೊಂದು
ಅವಳು ಮುಡಿದ ಹೂವಿಂದ ರಸವನ್ನ ಹೀರಲೆಂದು


ಪ್ರಕೃತಿಗೆ ಸ್ತ್ರೀಯನ್ನು ಹೋಲಿಸಿದ ಕವಿಯು
ತುಂಬಿ ತುಳುಕುತ್ತಿತ್ತು ನೀರ, ತೆರೆದ ಬಾವಿಯು
ಆಕಾಶದಿಂದ ಹಾರಿಬಂತು ಹಕ್ಕಿಗಳ ಗುಂಪು
ಕೋಗಿಲೆಯ ನಾದದಿಂದ ಕಿವಿಗಾಯ್ತು ಇಂಪು.|


                             ಸೋಮೇಶ್ ಗೌಡ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ