ಶನಿವಾರ, ಜುಲೈ 7, 2012



ನನ್ನ ಕವನ ನನ್ನ ಹಾಡು

ನಮಸ್ಕಾರ..... ಎಲ್ಲರೂ ಅವರವರ ಭಾವೆನೆಗೆ ತಕ್ಕಂತೆ ಕವನಗಳನ್ನು ಬರೆಯುತ್ತಾರೆ....ಇದು ನನ್ನ ಭಾವನಾತ್ಮಕ ಲೋಕ.
ನೋಡಿ ಹಾರೈಸಿ....ತಪ್ಪಿದ್ದಲ್ಲಿ ತಿದ್ದಿಸಿ..ನಾನು ಬರೆದಿರುವುದು ಬರಿ ಬರಹಗಳೆಷ್ಟೇ....ಇವು ಕವನ ಎಂದು ನನಗೆ ತಿಳಿಯಬೇಕಾದರೆ
ನಿಮ್ಮ ಅಭಿಪ್ರಾಯ ತುಂಬಾ ಮುಖ್ಯ.... ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ನನ್ನ ಬರಹಗಳನ್ನು ಹೆಸರಿಸಿ
ಇದು ನನ್ನ ಹಾಡು ನನ್ನ ಕವನ ......... ಒಲವೆ ಜೀವನ     

                                      ಬೆಂಬಲವೆ ಗುರು
                                      ಬೆಂಬಲಿಗರೆ ನನಗೆ ಗುರು
                                      ನನ್ನ ಕವನಗಳನ್ನು ಬೆಂಬಲಿಸಿ
                                      ಗುರುವಿನ ಪೀಠ ಅಲಂಕರಿಸಿ
                                      ಗುರು ದೇವೋ ಭವ!


(1)ನೆನಪು,ಕನಸುಗಳನ್ನೇರಿ ಸಾಗುತ್ತಿದೆ ಜೀವನದ ಸವಾರಿ

ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು..
ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ....


ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡ
ಮನಸ್ಸಲ್ಲಿ ಕೆಟ್ಟದ್ದನ್ನು ಎಂದೂ ಯೋಚಿಸಬೇಡ
ಕೋಗಿಲೆಗೆ ಸಮನಾಗಿ ಹಾಡುವಾಸೆಯೇ ನಿನಗೆ
ಎಂದೂ ಆಗದು ಕಲ್ಲು ಹೊಡೆಯಲು ಬಾನಿಗೆ.

ನೂರು ಜನ್ಮ ಹುಟ್ಟಿಬಂದರು ತೀರಿಸಲಾಗಲಿಲ್ಲ ತಾಯಿ ಋಣ
ತಾಯಿಯೇ ದೇವರು ಇದು ದೊಡ್ಡವರ ಮಾತಣ್ಣ
ಹೃದಯವೆಂಬ ಹಾಸಿಗೆಯಲಿ ಮಾಡದಿರು ನಿದ್ದೆ
ಮಾಡಿದರೆ ನಿದ್ದೆ, ಏಳಾಲಾಗದೆಂದೂ ಓ ಪೆದ್ದೆ.

ಎಷ್ಟು ಹುಡುಕಿದರು ಮತ್ತೆ ಮತ್ತೆ ಸಿಗದು ಶಾಲಾ ದಿನ
ಅದು ಪ್ರತಿಯೊಬ್ಬರ ಜೀವನದಲ್ಲೂ ಚಿನ್ನದ ಕ್ಷಣ
ಎಂದೆಂದೂ ಮಾಡದಿರು ಸಮಯವನು ವ್ಯರ್ಥ
ಅದು ಕೂಡ ವಹಿಸಿದೆ ಬದುಕಲಿ ಪ್ರಮುಖ ಪಾತ್ರ.|

                             ಸೋಮೇಶ್ ಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ