ಶನಿವಾರ, ಜುಲೈ 7, 2012

(7)ಚಂದದ ಅರಮನೆ

ಚಂದದ ಅರಮನೆಯಲ್ಲಿ
ಬೆಲ್ಲ ಸಕ್ಕರೆಯಿಲ್ಲ
ಮನೆ ಕಾಯೋ
ಆಳಿಗಂತೂ ಕೊರತೆಯಿಲ್ಲ

ಬಣ್ಣ ಬಳಿದರು ಏನು
ಕಷ್ಟ ಮುಗಿಯುವುದಿಲ್ಲ

ಉಕ್ಕಿನ ಮನುಜನಿಗೂ
ಅಪಾಯ ತಪ್ಪಿದಲ್ಲ
ಎಚ್ಚರ ತಪ್ಪಿದರೆ
ಮೇಲೇಳಲು ಅವಕಾಶವಿಲ್ಲ

ಕೊಬ್ಬಿದ ಹಾವನ್ನು
ಬಗ್ಗಿಸುವವರಿಗೆ ಬರವಿಲ್ಲ
ಇನ್ನೊಬ್ಬರನ್ನು ಹಿಗ್ಗಿಸುವ
ಪ್ರಯತ್ನ ಪೂರ್ಣಗೊಳ್ಳುತ್ತಿಲ್ಲ.|

ಇದು ಸಮಾಜದ ಸತ್ಯ ನಡೆಯುತ್ತಿದೆ ನಿತ್ಯ

                   ಸೋಮೇಶ್ ಗೌಡ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ